Wednesday, May 14, 2025

Kaveri nadiya stotra

 ಶ್ರೀಜಗನ್ನಾಥದಾಸರ ಕೃತಿ


ಕಾವೇರಿ ನದಿಯ ಸ್ತೋತ್ರ ಪದ


ರಾಗ : ನಾಟ

ಆದಿತಾಳ


ಕಾವೇರಿ ಕಲುಷಹಾರಿ

ಪಾವನ

ಶರೀರೆ ಶುಭತೋಷಕಾರಿ ||pa||


ಶ್ರೀ ವಾಸುದೇವ ರಂಗೇಶನಾಲಯಕೆ ನೀ

ಆವರಣಳಾಗಿಪ್ಪೆ ವಿರಜೆಯಂತೇ

ದೇವ ಋಷಿ ಗಂಧರ್ವ ಪಿತೃಪ ನರವರರಿಂದ

ಸೇವನೀಯಳಾಗಿ ಸರ್ವಾರ್ಥ ಪೂರೈಪೆ ||1||


ರವಿ ತುಲಾರಾಶಿಗೈದಿದ ಸಮಯದೊಳಗೊಂದು

ದಿವಸ ಮಜ್ಜನ ಗೈವ ಮಾನವರಿಗೆ

ಪವನಾಂತರಾತ್ಮಕನ ಪಾದಕಮಲವ ತೋರಿ

ಭವಜ ರೋಗವ ಕಳೆದು ಭಾಗ್ಯವಂತರ ಮಾಳ್ಪೆ ||2||


ಮೂಢಮತಿ ನಾನು ಕೊಂಡಾಡ ಬಲ್ಲೆನೆ ನಿನ್ನ

ಬೇಡಿಕೊಂಡೆನು ಹೃದಯ ನೀಡದೊಳಗೇ

ಗೂಡ ಪದ ಶಯನ ಜಗನ್ನಾಥ ವಿಠ್ಠಲನಂಘ್ರಿ

ನೋಡುವ ಸೌಭಾಗ್ಯ ದಯ ಮಾಡು ಪ್ರತಿದಿನದಲ್ಲಿ  ||3||


 *ಚಿಟ್ಟೆಸ್ವರ*

(ಮಧ್ಯಮಕಾಲ)


ಪಾನಿಪ ಮಪನೀಪಮಗಮಪನಿಪಾ

ಮಪಮಗಾಮರಿಸ ರಿಗಮಪದನಿಸ

ಸರಿಗಮರೀಸನಿ ಪನಿಸರಿಸಾನಿಪ

ಮರಿಸನಿಪ .... ರಿಸನಿಪಮ... ಸನಿಪಮರಿಸ ॥ಕಾವೇರಿ॥


No comments:

Post a Comment

Aaj ki raat - Stree 2

Movie: Stree2 (2024) Music: Sachin-Jigar Lyrics: Amitabh Bhattacharya Singers:  Madhubanti Bagchi and Divya Kumar Bande toh kya is husn pe f...