Thursday, May 15, 2025

Nambu Narayanana

 ಶ್ರೀಕನಕದಾಸರ ಕೃತಿ


ರಾಗ : ಮಲಯಮಾರುತ

ಆದಿತಾಳ


ನಂಬು ನಾರಾಯಣನ ನಂಬು ನರಹರಿಯ 

ನಂಬಿದಾ ಭಕ್ತರ ಕುಟುಂಬ ಸಾರಥಿಯ 

॥ಪ॥


ಬಲಿ ನಂಬಿ ಪಾತಾಳಲೋಕಕರಸಾದ

ಅದೆಕುಲದ ಪ್ರಹ್ಲಾದನು ನಿಜವ ಕಂಡ 

ಕಲಿ ವಿಭೀಷಣ ನಂಬಿ ಲಂಕೆಯಲಿ ಸ್ಥಿರವಾದ

ಛಲದ ಪಾರ್ಥನು ನಂಬಿ ವಿಶ್ವರೂಪವ ಕಂಡ||1||


ಅಂಬರೀಷನು ನಂಬಿ ವೈಕುಂಠವೇರಿದನು|

ಹಂಬಲಿಸಿ ಶಶಿಧರನು ಉರಿಯ ಗೆದ್ದ||

ಕುಂಭಿನೀದೇವಿ ತಾ ಬಂಧನವ ಕಳೆದಳು||

ಅಂಬುಜಾಕ್ಷಿ ದ್ರೌಪದಿಯು ಮಾನ ಉಳುಹಿಕೊಂಡಳು|| 2||


ಅತಿ ಭಕುತರಿಗೆ ಮೆಚ್ಚಿ ಗತಿಮೋಕ್ಷವನಿತ್ತನು|

ಮತಿಭ್ರಷ್ಟ ಅಜಮಿಳನ ಉದ್ಧರಿಸಿದನು|| 

ಕ್ಷಿತಿಯೊಳಗೆ ಕಾಗಿನೆಲೆ ಆದಿಕೇಶವರಾಯ|

ಪತಿತ ಪಾವನ ಪರಮಪುರುಷೋತ್ತಮನನು||3|| 


No comments:

Post a Comment

Aaj ki raat - Stree 2

Movie: Stree2 (2024) Music: Sachin-Jigar Lyrics: Amitabh Bhattacharya Singers:  Madhubanti Bagchi and Divya Kumar Bande toh kya is husn pe f...