Friday, May 16, 2025

Aaj ki raat - Stree 2

Movie: Stree2 (2024)
Music: Sachin-Jigar
Lyrics: Amitabh Bhattacharya
Singers: Madhubanti Bagchi and Divya Kumar

Bande toh kya is husn pe farishtey bhi fanna hai
Bas door se dekhiye isse chhuna mana hai
Chhuna mana hai


Thodi fursat bhi meri jaan kabhi baahon ko dijiye
Thodi fursat bhi meri jaan kabhi baahon ko dijiye
Aaj ki raat maza husn ka aankhon se lijiye
Aaj ki raat maza husn ka aankhon se lijiye
Waqt barbaad na bin baat ki baaton mein kijiye
Waqt barbaad na bin baat ki baaton mein kijiye
Aaj ki raat maza husn ka aankhon se lijiye
Aaj ki raat maza husn ka aankhon se lijiye


Jaan ki qurbani
Le le dilbar jaani
Tabahi pakki hai
Aag tu main pani
Jaan ki qurbani
Le le dilbar jaani
Tabahi pakki hai
Aag tu main pani


Mere mehboob samajhiye zara mauke ki nazakat
Mere mehboob samajhiye zara mauke ki nazakat
Ke khareedi nahi ja sakti haseeno ki ijaazat
Ke khareedi nahi ja sakti haseeno ki ijaazat


Naaz itna meri jaan
Naaz itna bhi nahi khokhle vaadon pe kijiye
Aaj ki raat maza husn ka aankhon se lijiye
Aaj ki raat maza husn ka aankhon se lijiye


Jaan ki qurbani
Le le dilbar jaani
Tabahi pakki hai
Aag tu main pani
Jaan ki qurbani
Le le dilbar jaani
Tabahi pakki hai
Aag tu main pani

Aaj ki raat - Don

Movie: Don (2006)
Music: Shankar-Ehsaan-Loy
Lyrics: Javed Akhtar
Singers: Alisha Chinay, Mahalaxmi Iyer, Sonu Nigam 

[F1] Shaam Hai Jaam Hai, Aur Hai Nasha

Tann Bhi Hai Mann Bhi Hai Pighla Hua

[F2] Chhaayi Hai Rangeeniyaan
Phir Bhi Hai Betaabiyaan
[F1] Kyun Dhadakta Hai Dil
Kyun Yeh Kehta Hai Dil
Deewanon Ko Ab Tak Nahi Hai Yeh Pata
[CHORUS] Aaj Ki Raat Hona Hai Kya

Paana Hai Kya
Khona Hai Kya
Aaj Ki Raat Hona Hai Kya
Paana Hai Kya
Khona Hai Kya

[MUSIC]
4
3
2
1
[F1] Do Ghadi Mein Yahaan Jaane Kya Hoga
[F2] Jo Hamesha Tha Mera Dil Mera Hoga
[F1] Kaun Kiske Dil Mein Hai Faisla Hoga
[F2] Faisala Hai Yahi Jeet Hogi Meri
[F1] Deewaano Ko Ab Tak Nahi Hai Ye Pata
[M] Aaj Ki Raat Hona Hai Kya

Paana Hai Kya
Khona Hai Kya
[CHORUS] Aaj Ki Raat Hona Hai Kya
Paana Hai Kya
Khona Hai Kya

[MUSIC]
4
3
2
1

[M] Aaon Main Tumse Kahu Baat Chupke Se
Rang Badlegi Pal Mein Raat Chupke Se
Tumko Le Jaaunga Phir Saath Chhupke Se

[F2] Jaaoge Tum Kahaan
[F2] Dekho Main Hu Yahaan
[F1] Deewaano ko Ab Tak Nahi Hai Ye Pata
[CHORUS] Aaj Ki Raat
Hona Hai Kya
Paana Hai Kya
Khona Hai Kya

Yelli mayavadane rangayyanu


 

Ranga banda brundavanadali ninda

 


Namah parvathi patinuta

 


Yenu ee vishesha vedavyasa

 ಶ್ರೀಮೋಹನದಾಸಾರ್ಯ ವಿರಚಿತ


ಶ್ರೀವೇದವ್ಯಾಸದೇವರ ಸ್ತೋತ್ರ ಪದ


ರಾಗ : ಕಾಂಬೋಧಿ

ಆದಿತಾಳ


ಏನೋ ಈ ವೇಷ ವೇದವ್ಯಾಸ ||pa||


ಭಾನುಕೋಟಿ ಪ್ರಕಾಶ ಬದರೀ ನಿವಾಸ ||a.pa||


ದ್ರೌಪದಿ ಕರೆಯಲಪಾರ ವಸ್ತ್ರವನಿತ್ತೆ

ಕೌಪೀನ ಧರಿಸಿದ ಕೌತುಕವೇನಯ್ಯ ||1||


ಮುತ್ತು ಮಾಣಿಕ್ಯ ನವರತ್ನ ಮಕುಟವಿರೆ

ನೆತ್ತಿಲಿ ಕೆಂಜೆಡೆ ಪೊತ್ತುಕೊಂಡಿಪ್ಪುದು ||2||


ವರ ವೈಕುಂಠವ ಬಿಟ್ಟು ಮೋಹನ ವಿಠ್ಠಲ

ಧರೆಯೊಳು ಬೋರೆಯ ಮರದಡಿಯಲಿರುವುದು ||3||



SriMohanadasarya virachita Sri vedavyasadevara stotra pada


Raaga : Kambodhi

Aaditaala


Yeno ee vesha vedavyasa||p||


Banu koti prakashaa badari nivasa||A.P||


Mutthu manikya mukuta veere

netthili genjade potthi kondippudhu|1|


drowpathi kareyalapaarvasthravanitthe

kowpina dharisidha kouthukavenayya|2|


vara vaikuntavannu bittu mohana vittalanna

dhareyolu poreya maradhadili iruvudhu|3|


Yena pelali gopi

 ಶ್ರೀ ಪುರಂದರದಾಸರ ಕೃತಿ 


 ರಾಗ : ಮಾಂಡ್

 ಆದಿತಾಳ 


ಏನ ಪೇಳಲೆ ಗೋಪಿ ನಿನ್ನ ಮಗನ ಜಾಲ ॥ ಪ ॥

ಮಾನ ತಪ್ಪಿ ಬಂದ ಮನೆಯೊಳಗೆ ಗೋಪಿ 

॥ ಅ ಪ ॥


ಕೊಡ ಹಾಲು ಕುಡಿದನೆ ಗಡಿಗೆಯ ಒಡೆದನೆ ।

ಅಡಗಿದ್ದನೆ ದೊಡ್ಡ ಕೊಡದೊಳಗೆ ॥

ಹುಡುಗ ಸಿಕ್ಕಿದನೆಂದು ಹೊಡೆಯಲು ಹೋದರೆ ।

ಬಡವರ ಮಗನೇನೆ ಹೊಡೆಯಲಿಕ್ಕೆ ಗೋಪಿ ॥ 1 ॥


 ಅಳಿಯನ ವೇಷದಿ ಮಗಳ ಕರೆಯ ಬಂದ ।

ಕಲಹ ಮಾಡಿ ತಾ ಕಳಿಸೆಂದ ॥

ಒಲುಮೆಯಿಂದಲಿ ತಿಂಗಳೆರಡಿಟ್ಟುಕೊಂಡರೆ ।

ಗಿಳಿಯಂಥ ಹೆಣ್ಣಿನ ಕೆಡಿಸಿದನೆ ಗೋಪಿ ॥ 2 ॥


 ಇಷ್ಟೊಂದು ಸಿಟ್ಟೇಕೆ ಚಿಣ್ಣ ಕೃಷ್ಣನ ಮೇಲೆ ।

ಪುಟ್ಟಿಸಬೇಡಿರೆ ಅನ್ಯಾಯವ ॥

ಸೃಷ್ಟಿಗೊಡೆಯ ನಮ್ಮ ಪುರಂದರವಿಠಲನ ।

ದೃಷ್ಟಿಸಿ ನೋಡಿರೆ ತೊಟ್ಟಿಲಿನೊಳಗೆ ॥ 3 ॥


Srinivasanu oliyanu

 ಶ್ರೀಪುರಂದರದಾಸರ ಕೃತಿ


ರಾಗ : ರೀತಿಗೌಳ

ಆದಿತಾಳ 


ಶ್ರೀನಿವಾಸನು ಒಲಿಯನು ಕೇಳೋ

ಜ್ಞಾನೋಪಾರ್ಜನೆ ಮಾಡದಲೆ

॥ಪ॥


ಏನೇನೋ ಸತ್ಕರ್ಮವ ಮಾಡಲು

ಪ್ರಾಣೇಶಾರ್ಪಣವೆನ್ನದಲೆ

॥ಅ.ಪ॥


ಸ್ನಾನವು ಸಂಧ್ಯಾವಂದನ ಜಪ ತಪ

ಜ್ಞಾನ ಸಾಧನವಿದೆನ್ನದಲೆ

ದಾನ ಧರ್ಮಗಳು ಈಶನ ಅನು-

ಸಂಧಾನವ ಮಾಡಿ ಮಾಡದಲೆ

॥೧॥


ಸಾಧು ಸಂಗದಲಿ ತೀರ್ಥಯಾತ್ರೆಗಳ

ಪಾದದಿ ನಡೆದು ನೀ ಮಾಡದಲೆ

ಭೇದಪಂಚಕವು ಜಗದಿ ಅಭೇದವ

ಮಾಧವನಲಿ ನೀ ತಿಳಿಯದಲೆ

॥೨॥


ಒಂದು ಕ್ಷಣವು ಬಿಡದಿಂದಿರೇಶ

ಗೋವಿಂದನಂಘ್ರಿಯ ನೀ ನೆನೆಯದಲೆ

ವಂದ್ಯನೂ ಶ್ರೀ ಪುರಂದರವಿಠಲ

ಬಂಧಕಮೋಚಕನೆನ್ನದಲೆ

॥೩॥


Veni madhavana torise

 ಶ್ರೀವಿಜಯದಾಸರ ಕೃತಿ


ರಾಗ : ಹಿಂದೋಳ

ಆದಿತಾಳ


ವೇಣಿ ಮಾಧವನ ತೋರಿಸೆ ಜಾಣೆ ತ್ರಿವೇಣಿ 

ಕಾಣದೆ ನಿಲ್ಲಲಾರೆನೆ ॥ಪ॥


ಕಾಣುತ ಭಕುತರ ಕರುಣದಿ ಸಲಹುವಿ

ಜಾಣೆ ತ್ರಿವೇಣಿ ಕಲ್ಯಾಣಿ ಸುಸನ್ನುತೆ ॥ಅ.ಪ॥


ಬಂದೆನೆ ಬಹಳ ದೂರದಿ ಭವಸಾಗರ ತರಣಿ

ನಿಂದೆನೆ ನಿನ್ನ ತೀರದಿ

ಒಂದು ಘಳಿಗೆ ನೀ ಹರಿಯ ಬಿಟ್ಟಿರಲಾರಿ

ಮಂದಗಮನೆ ಎನ್ನ ಮುಂದಕ್ಕೆ ಕರೆಯೆ ||1||


ಶರಣಾಗತರನು ಪೊರೆವುದು ಅದು ನಿನ್ನ ಬಿರುದು

ಕರುಣವಿಂದೆನ್ನ ಕರೆವುದು

ಸ್ಮರಣೆ ಮಾತ್ರದಿ ಭವ ತಾಪವ ಹರಿಸುವ

ಸ್ಮರನಪಿತನ ಮುರಹರನ ಕರುಣದಿ ||2||


ಸುಜನರಿಗೆಲ್ಲ ದಾತಳೆ ಸುಶೀಲೆ ಕೇಳೆ

ಕುಜನರ ಸಂಗದೂರಳೆ

ನಿಜ ಪದವಿಯನಿತ್ತು ಸಲಹುವ ನಮ್ಮ

ಶ್ರೀವಿಜಯವಿಠ್ಠಲನ ನಿಜಪದವನು ತೋರಿಸೆ ||3||


Thursday, May 15, 2025

Seridenu jagadeeshana

 ಶ್ರೀವ್ಯಾಸರಾಜರ ಕೃತಿ


ರಾಗ : ರಂಜನಿ

ಖಂಡಛಾಪು


ಸೇರಿದೆನೋ ಸೇರಿದೆನೋ ಜಗದೀಶನ ॥ ಪ ॥

ನರಕಜನ್ಮದ ಭಯವು ಎನಗೆ ಇನಿತಿಲ್ಲ ॥ ಅ ಪ ॥


ನೇತ್ರಗಳು ಕೃಷ್ಣನ ಮೂರ್ತಿ ನೋಡುತಲಿವೆ ।

ಶ್ರೋತ್ರಗಳು ಹರಿಕಥೆಯ ಕೇಳುತಲಿವೆ ॥

ರಾತ್ರಿ ಹಗಲು ಎನ್ನ ಮನಸು ಶ್ರೀರಂಗನಲ್ಲಿ ।

ಪಾತ್ರವಾಡುತಿದೆನ್ನ ಗಾತ್ರ ಕೃಷ್ಣನ ಮುಂದೆ ॥ 1 ॥


ಹಸ್ತಗಳು ಮಂಟಪ ಶುದ್ಧಿಯನು ಮಾಡುತಿವೆ ।

ಮಸ್ತಕವು ಹರಿಚರಣಕೆರಗುತಿದೆಕೋ ॥

ವಿಸ್ತಾರವಾದ ಪ್ರದಕ್ಷಿಣೆಯ ಮಾಡುತಿದೆ ।

ಕಸ್ತೂರಿ ತುಳಸಿಯನು ಮೂಗು ಆಘ್ರಾಣಿಸುತಿದೆ ॥ 2 ॥


ಹರಿನಾಮ ಸ್ಮರಣೆಯನು ನುಡಿಯುತಿದೆ ಎನ್ನ ಜಿಹ್ವೆ ।

ಹರಿಭಕುತಿ ಸುಧೆಯ ಪಾನಗಳಿಂದಲಿ ॥

ಹರಿ ಪ್ರೀತಿಯಾಗಿದೆ ನೋಡಿದರೆನ್ನ ದೇಹ ।

 ಸಿರಿಕೃಷ್ಣರಾಯನ್ನ ಮನಮಂದಿರದಿ ಕಂಡೆ ॥ 3 ॥


Rama raghukulabdhi soma

 ಶ್ರೀವಿಜಯದಾಸಾರ್ಯ ವಿರಚಿತ ಶ್ರೀರಾಮದೇವರ ಸ್ತುತಿ ಪದ.


ರಾಗ : ವಸಂತ

ಆದಿತಾಳ


ರಾಮ ರಘುಕುಲಾಬ್ಧಿ ಸೋಮಾ ||ಪ||


ಸಂತತ ಭಕ್ತ ಪ್ರೇಮಾ ಮಂಗಲಧಾಮಾ |

ಪರಿಪೂರ್ಣ ನಿನ್ನಯ ನಾಮವೆ ಗತಿ ಎನಗೆ ||ಅ.ಪ||


ಏಸಪರಾಧಗಳೆಣಿಸದೆ ದಯವಿಟ್ಟು |

ದೋಷದೂರನ ಮಾಡೊ ಕೇಶವ ಕಮಲಾಕ್ಷಾ ||1||


ಪ್ರಣವಾಕಾರ ವಿಮಾನ ಮನಿಯಾಗಿಯಿಪ್ಪನೆ |

ಫಣಿಶಾಯಿ ರಂಗೇಶ ಮಣಿಗಣ ಭೂಷಣನೆ||2||


ಇಕ್ವಾಕು ನೃಪವರದ ಸಾಕ್ಷಾತ್ತ ಪರಮಾತ್ಮಾ-|

ಅಧ್ಯಕ್ಷ ವಿಜಯವಿಠ್ಠಲಾ ರಕ್ಷಿಸು ಬಿಡದೆನ್ನ||3||


Raghavendra guru pavanakaya

 ಶ್ರೀವಿಜಯದಾಸರ ಕೃತಿ


ರಾಗ : ಖರಹರಪ್ರಿಯ

ಆದಿತಾಳ


ರಾಘವೇ೦ದ್ರ ಗುರು ಪಾವನಕಾಯ

ರಾಘವೇ೦ದ್ರ ಮ೦ತ್ರಾಲಯ ನಿಲಯ   || ಪ ||


ರಾಘವೇ೦ದ್ರ ದುರಿತೌಘ ಪರಿಹಾರ

ರಾಘವೇಶನ ಪಾದವನಜಾರಾಧಕ          || ೧ ||


ಶರಣು ಹೊಕ್ಕೆನು ಇ೦ದುಕಿರಣ ಪೋಲುವ ಚರಣ

ಸ್ಮರಣೆ ಕರುಣಿಸುವುದು ಕರುಣದಿ೦ದ ಗುರು         || ೨ ||


ಸಿರಿವರ ವಿಜಯವಿಠ್ಠಲ ಪರನೆ೦ದು

ಸ್ಥಿರವಾಗಿ ಸ್ಥಾಪಿಸಿ ಮೆರೆವ ನಿರ್ಮಲಕಾಯ  || ೩ ||



Sri Vijayadasara Kriti


raaga : kharaharapriya

Aaditaala.


Raghavendra guru pavanakaya

Raghavendra mantralaya nilaya


Raghavendra durithauga parihara

Raghaveshana pada vanajaradhaka||1||


Sharanu hokkeno indhu kirana poluva nimma charana

Smarane karunisuvudhu karunadhindha guru||2||


Sirivara vijaya vittala paranendhu

Sthiravagi sthapisi meredha nirmalakaya||3||


Padumanaabhane ninne

 ಹೆಳವನಕಟ್ಟೆ ಗಿರಿಯಮ್ಮನವರ ಕೃತಿ


ರಾಗ : ಪೂರ್ವಿಕಲ್ಯಾಣಿ

ಆದಿತಾಳ


(ಸಂದರ್ಭೋಚಿತ ಕೃತಿ)


ಪದುಮನಾಭನೆ ನಿನ್ನ ಪಾದ ಕಿಂಕರ ನನ್ನು

 ಕೈಬಿಡುವುದು ಉಚಿತವೇ ರಂಗ ॥ಪ॥


ಮುದದಿಂದ ನಿನ್ನ ಪಾದಗೆರಗುವೆ ನಾನು ತ್ವರಿ-

ತದಿ ನೀ ಕಾಯೊ ಎನ್ನೊಡೆಯ ರಂಗ ॥ಅ.ಪ॥


ಅಜಗರಶಯನನೆ ಬುಧಜನ ನಮಿತನೆ

ತ್ರಿಜಗವಂದಿತಪಾದ ಪದುಮಜ ಜನಕನೆ ॥೧॥


ಶಿಶು ಅವತಾರದಿ ಪಶುಗಳ ಸಲಹಿದೆ

ಶಶಿಭೂಷಣಸಖ ಶಿಶುವ ಕಾಪಾಡೊ ॥೨॥



ಸಾಂದೀಪಗನಿಗೊಲಿದೆ ಸಂದೇಹವಿಲ್ಲ

ತಂದೆ ಹೆಳವನಕಟ್ಟೆ ರಂಗ ಕೃಪಾಂಗ ॥೩॥


Nambu Narayanana

 ಶ್ರೀಕನಕದಾಸರ ಕೃತಿ


ರಾಗ : ಮಲಯಮಾರುತ

ಆದಿತಾಳ


ನಂಬು ನಾರಾಯಣನ ನಂಬು ನರಹರಿಯ 

ನಂಬಿದಾ ಭಕ್ತರ ಕುಟುಂಬ ಸಾರಥಿಯ 

॥ಪ॥


ಬಲಿ ನಂಬಿ ಪಾತಾಳಲೋಕಕರಸಾದ

ಅದೆಕುಲದ ಪ್ರಹ್ಲಾದನು ನಿಜವ ಕಂಡ 

ಕಲಿ ವಿಭೀಷಣ ನಂಬಿ ಲಂಕೆಯಲಿ ಸ್ಥಿರವಾದ

ಛಲದ ಪಾರ್ಥನು ನಂಬಿ ವಿಶ್ವರೂಪವ ಕಂಡ||1||


ಅಂಬರೀಷನು ನಂಬಿ ವೈಕುಂಠವೇರಿದನು|

ಹಂಬಲಿಸಿ ಶಶಿಧರನು ಉರಿಯ ಗೆದ್ದ||

ಕುಂಭಿನೀದೇವಿ ತಾ ಬಂಧನವ ಕಳೆದಳು||

ಅಂಬುಜಾಕ್ಷಿ ದ್ರೌಪದಿಯು ಮಾನ ಉಳುಹಿಕೊಂಡಳು|| 2||


ಅತಿ ಭಕುತರಿಗೆ ಮೆಚ್ಚಿ ಗತಿಮೋಕ್ಷವನಿತ್ತನು|

ಮತಿಭ್ರಷ್ಟ ಅಜಮಿಳನ ಉದ್ಧರಿಸಿದನು|| 

ಕ್ಷಿತಿಯೊಳಗೆ ಕಾಗಿನೆಲೆ ಆದಿಕೇಶವರಾಯ|

ಪತಿತ ಪಾವನ ಪರಮಪುರುಷೋತ್ತಮನನು||3|| 


Muttaide yaagirabeku

 ಶ್ರೀಪುರಂದರದಾಸರ ಕೃತಿ


ರಾಗ : ಸಾರಂಗ

ಆದಿತಾಳ


ಮುತ್ತೈದೆಯಾಗಿರಬೇಕು ಮುದದಿಂದಲಿ |

ಹತ್ತುನೂರು ನಾಮದೊಡೆಯ ಹರಿ ನಮ್ಮ ಪತಿಯೆಂದು 

॥ಪ॥


ಗುರುಮಧ್ವಶಾಸ್ತ್ರವನು ಓದುವುದೆ ಮಾಂಗಲ್ಯ |

ವರವೈರಾಗ್ಯವೆಂಬ ಒಪ್ಪುವ ಮೂಗುತಿ ||

ತಾರತಮ್ಯದರಿಮೆ ತಾಯಿತಿ ಮುತ್ತುಸರ |

ಕರುಣರಸಗಳೆ ಉಳ್ಳ ಕಟ್ಟಾಣಿ ಕಟ್ಟಿಕೊಂಡು ॥೧॥


ಹರಿಕಥೆಯ ಕೇಳುವುದೆ ಕಿವಿಗೆ ಮುತ್ತಿನ ಓಲೆ |

ನಿರುತ ಸತ್ಕರ್ಮವೇ ನಿಜಕಾಂತಿಯು ||

ಪರಮ ಭಕ್ತರ ಪಾದರಜ ಹರಳು ಬಂಗಾರ |

ಗುರುಭಕುತಿಯೆಂಬಂಥ ಗಂಧ ಕುಂಕುಮ ಧರಿಸಿ ॥೨॥


ಪೊಡವಿಯೊಳು ಪರಹಿತದ ಪಟ್ಟವಾಳಿಯನುಟ್ಟು |

ಕೊಡುವ ಧರ್ಮವೆಂಬ ಕುಪ್ಪಸವ ತೊಟ್ಟು ||

ಬಿಡದೆ ಎನ್ನೊಡೆಯ ಶ್ರೀ ಪುರಂದರವಿಠಲನ |

ಧೃಡ ಭಕ್ತಿಯೆಂಬಂಥ ಕಡಗ - ಬಳೆ ಇಟ್ಟುಕೊಂಡು ॥೩॥


Muraliya baariso madhava

 ಶ್ರೀವಿದ್ಯಾಪ್ರಸನ್ನತೀರ್ಥರ ಕೃತಿ


ರಾಗ : ಸಿಂಧುಭೈರವಿ

ಆದಿತಾಳ


ಮುರಳಯ ಬಾರಿಸೋ ಮಾಧವ 

ಮುರಳಿಯ ಬಾರಿಸೋ ಮಾಧವ ಕುಣಿಯುವೆ ||ಪ||


ಭವದ ಸಂತಾಪವು ಕೊನೆಯಾಗಲಿ |

ಭುವಿಯೊಳು ಜೀವನ ಸವಿಯಾಗಲಿ ||

ನವವಿಧ ಭಕುತಿಯು ನಲಿದಾಡಲಿ |

ಕಿವಿತುಂಬ ಕೇಳಿ ನಾ ನಲಿಯುವೆ ಶ್ರೀಕರ ||1||


ಅರಿಷಡವರ್ಗಗಳೆಲ್ಲ ಮರೆಯಾಗಲಿ |

ಹರುಷ ಮಾನಸದಲ್ಲಿ ಸೆರೆಯಾಗಲಿ ||

ಮುರಳಿಯ ಧ್ವನಿಯು ತಾ ದೊರೆಯಾಗಲಿ |

ಪರಮ ವೈರಾಗ್ಯವೆ ಸಿರಿಯಾಗಲಿ ದೇವ ||2||


ಸಾಲೋಕ್ಯ ಸಾರೂಪ್ಯ ಸಾಯುಜ್ಯವು |

ಈ ಲೋಕದಲ್ಲೀಗ ಈ ಲಾಭವು ||

ಶ್ರೀಲೋಲ ಗೋಪಾಲ ಬಾಲ ಪ್ರಸನ್ನನೆ |

ಮೇಲಾಯ್ತು ನರಜನ್ಮ ಇರಲಿ ಎಂದೆಂದದಿಗು ||3||


Sri Vidyaprasannaterrthara kriti


raga : Sindhubhairavi

aaditala


Muraleeya bariso madhava 

Muraliya baariso madhava kuniyuve || pa ||


Bhavada santapavu koneganali |

Bhuviyolu jeevana saviyagali ||

Navavidha bhaktiyu nalidadali |

Kivitunba keli na naliyuve sreedhara ||1|| 


Arishadvargagalella mareyagali |Harusha manasadalli sereyagali || Muraliyadhvaniyu ta doreyagali | Paramavairagyave siriyagali deva ||2||


Salokya saroopya sayujyavu | Eelokadalliga  ee laabhavoo ||

Shreelola gopala bala prasannane | Melaytu narajanma iralee endendigoo || 3 ||


Wednesday, May 14, 2025

Dashavatarada aarati pada

 ಶ್ರೀಮೋಹನದಾಸರ ಆರಾಧನೆಯ ಪ್ರಯುಕ್ತ


 *ದಶಾವತಾರದ* *ಆರತಿ* *ಪದ*


ರಾಗ : ಆನಂದ ಭೈರವಿ

ತಾಳ : ತಿಶ್ರನಡೆ


ಲಕ್ಷ್ಮೀವಲ್ಲಭ ಜಯ ಪಕ್ಷಿವಾಹನ ಜಯ

ಮೋಕ್ಷದಾಯಕನೆ ಜಯ ಜಯ ॥ ಪ॥


ಮೋಕ್ಷದಾಯಕನೆ ಮಧುಸೂದನ ಪದ್ಮಾಕ್ಷಗಾರುತಿಯ ಬೆಳಗಿರೇ ॥ಅ.ಪ.॥


ಜಲದೊಳು ಸಂಚರಿಸಿ ಬಲು ಗಿರಿಯ ಧರಿಸಿದ

ಇಳೆಯ ದಾಡೆಯಿಂದ ನೆಗಹಿದಾ ||

ಇಳೆಯ ದಾಡೆಯಿಂದ ನೆಗಹಿದ ನರಹರಿ 

ಚೆಲುವಗಾರುತಿಯ ಬೆಳಗಿರೆ 

॥೧॥

ಶೋಭಾನೆ ಶೋಭಾನೆ ಶೋಭಾನೆ


ಚಿಕ್ಕ ಬ್ರಾಹ್ಮಣನಾಗಿ ಬಲಿಯ ದಾನವ ಬೇಡಿ

ಆಕ್ರಮಿಸಿದನೆ ತ್ರಿಲೋಕ ||ಆಕ್ರಮಿಸಿ ತ್ರಿಲೋಕನಾಳ್ದ ಶ್ರೀರಾಮ

ಶ್ರೀ ಕೃಷ್ಣಗಾರುತಿಯ ಬೆಳಗಿರೇ

॥೨॥

ಶೋಭಾನೆ ಶೋಭಾನೆ ಶೋಭಾನೆ

 

ನಗ್ನನಾಗಿ ವ್ರತವಾ ವಿಘ್ನವ ಚರಿಸಿದ

ಅಜ್ಞಾನಿ ಕಲಿಯ ಸದೆದ ||ಅಜ್ಞಾನಿ ಕಲಿಯ ಸದೆದ ಮೋಹನ್ನ ವಿಠ್ಠಲ ಸರ್ವಜ್ಞಗಾರುತಿಯ ಬೆಳಗಿರೇ

॥೩॥

ಶೋಭಾನೆ ಶೋಭಾನೆ ಶೋಭಾನೆ


Kinkarana dhwanige

 ಶ್ರೀವಿಜಯದಾಸರ ಕೃತಿ


ರಾಗ :ಸರಸ್ವತಿ

ಆದಿತಾಳ


ಕಿಂಕರನ ಧ್ವನಿಗೆ ಕೊಡು ಮತಿಯನು||pa||

ಪಂಕಜಾನಾಭನ ಸೊಸೆ ಸರಸ್ವತಿಯೆ ||a.pa||


ಸಕಲ ವಿದ್ಯಾರಂಭೆ ಕನಕ ಪುತ್ಥಳಿ ಬೊಂಬೆ

ವಿಕಸಿತ ಸುಲಲಿತಾಂಬೆ ಸುನಿತಂಬೆ

ನಿಕುರುಂಬೆ ಸುರರಂಭೆ ದಂತ ದಾಳಿಂಬೆ

ಭಕುತಿಯಲಿ ಕಾಂಬೆ ನಿನ್ನ ನಾಮವನುಂಬೆ||1||


ಗಂಗೆ ಯಮುನೆ ಉಭಯ ಸಂಗಮೆ ಭಕ್ತ ಭಯ

ಹಿಂಗಿಸಿ ಕೊಡು ಅಭಯ ಅಖಿಳ ಧ್ಯೇಯೆ

ಮಂಗಳ ಶೋಭನ ಮಣಿಯೆ ಅಭ್ಯುದಯೆ ಅತಿ ಸದಯೆ

ರಂಗು ಮಾಣಿಕ ಪ್ರಭೆಯೆ ಸುಜನಾಬ್ಧಿಗೇಯೆ||2||


ಪ್ರಯಾಗ ವರಕ್ಷೇತ್ರವಾಸೆ ಪುಣ್ಯಕ್ಷೇತ್ರೆ

ಕ್ಷಯ ರಹಿತ ಮುನಿಸ್ತೋತ್ರೆ ಶುಭಚರಿತ್ರೆ

ನಯವಿನಯ ನೇತ್ರೆ ಪವಿತ್ರ ಅಜನ ಕಳತ್ರೆ

ಜಯಜಯೆ ಸಿರಿ ವಿಜಯವಿಠ್ಠಲನ ಪೌತ್ರೆ ||3||


Kaveri nadiya stotra

 ಶ್ರೀಜಗನ್ನಾಥದಾಸರ ಕೃತಿ


ಕಾವೇರಿ ನದಿಯ ಸ್ತೋತ್ರ ಪದ


ರಾಗ : ನಾಟ

ಆದಿತಾಳ


ಕಾವೇರಿ ಕಲುಷಹಾರಿ

ಪಾವನ

ಶರೀರೆ ಶುಭತೋಷಕಾರಿ ||pa||


ಶ್ರೀ ವಾಸುದೇವ ರಂಗೇಶನಾಲಯಕೆ ನೀ

ಆವರಣಳಾಗಿಪ್ಪೆ ವಿರಜೆಯಂತೇ

ದೇವ ಋಷಿ ಗಂಧರ್ವ ಪಿತೃಪ ನರವರರಿಂದ

ಸೇವನೀಯಳಾಗಿ ಸರ್ವಾರ್ಥ ಪೂರೈಪೆ ||1||


ರವಿ ತುಲಾರಾಶಿಗೈದಿದ ಸಮಯದೊಳಗೊಂದು

ದಿವಸ ಮಜ್ಜನ ಗೈವ ಮಾನವರಿಗೆ

ಪವನಾಂತರಾತ್ಮಕನ ಪಾದಕಮಲವ ತೋರಿ

ಭವಜ ರೋಗವ ಕಳೆದು ಭಾಗ್ಯವಂತರ ಮಾಳ್ಪೆ ||2||


ಮೂಢಮತಿ ನಾನು ಕೊಂಡಾಡ ಬಲ್ಲೆನೆ ನಿನ್ನ

ಬೇಡಿಕೊಂಡೆನು ಹೃದಯ ನೀಡದೊಳಗೇ

ಗೂಡ ಪದ ಶಯನ ಜಗನ್ನಾಥ ವಿಠ್ಠಲನಂಘ್ರಿ

ನೋಡುವ ಸೌಭಾಗ್ಯ ದಯ ಮಾಡು ಪ್ರತಿದಿನದಲ್ಲಿ  ||3||


 *ಚಿಟ್ಟೆಸ್ವರ*

(ಮಧ್ಯಮಕಾಲ)


ಪಾನಿಪ ಮಪನೀಪಮಗಮಪನಿಪಾ

ಮಪಮಗಾಮರಿಸ ರಿಗಮಪದನಿಸ

ಸರಿಗಮರೀಸನಿ ಪನಿಸರಿಸಾನಿಪ

ಮರಿಸನಿಪ .... ರಿಸನಿಪಮ... ಸನಿಪಮರಿಸ ॥ಕಾವೇರಿ॥


Karunisai shree rama

 ಹರಿದಾಸಿನಿ ಅಂಬಾಬಾಯಿಯವರ ಕೃತಿ


ರಾಗ : ನಾದನಾಮಕ್ರಿಯ

ತಾಳ : ಖಂಡಛಾಪು


ಕರುಣಿಸೈ ಶ್ರೀ ರಾಮ ಕೌಸಲ್ಯ ಪ್ರೇಮ

ಶರಣ ಜನಕನು ಪೊರೆವ ಕಾರುಣ್ಯಧಾಮ || ಪಿಎ ||


ದಶರಥಾತ್ಮಜ ಯಜ್ಞ ಕಾಯ್ದು ಸೀತೆಯ ವರಿಸಿ

ಕುಶಲದಿಂದಲಿ ಬಂದು ಪ್ರತಿಯೊಬ್ಬರಲೂ

ದಶರಥನ ಸೂಚನೆಯಲಿ ಸತಿ ಅನುಜ ಸಹ ವನದಿ

ನಸುನಗುತ ಚರಿಸಿ ರಕ್ಕಸರ ಸದೆ ಬಡಿದೆ || 1 ||


ಸತಿಯೆ ಕಳೆದಿರೆ ಹನುಮ ಹಿತವಾರ್ತೆ ಬಿನೈಸೆ

ಹತಗೈದು ರಾವಣಾದಿಗಳನೆಲ್ಲ

ಹಿತದ ರಾಜ್ಯದ ವಿಭೀಷಣ ರವಿಜರಿಗೆ ಇತ್ತು

ವ್ರತ ಬಿಡಿಸಿ ಭರತನಿಗೆ ಧರಣಿಯಾಳಿದನೇ || 2 ||


ಪಟ್ಟಾಭಿರಾಮ ಮಂಗಳ ನಾಮ ಕೃಪೆಯಿಂದ

ಇಷ್ಟಾರ್ಥವೀಯೊ ಸನ್ಮಂಗಳವನೂ

ದಿಟ್ಟ ಶ್ರೀ ಹನುಮ ವಂದಿತ ಚರಣ ನಮಿಸುವೆನು

ಶ್ರೇಷ್ಠ ಶ್ರೀ ಗೋಪಾಲಕೃಷ್ಣವಿಠ್ಠಲನೇ || 3 ||


Ide paaliside paaliside

 ಶ್ರೀಗೋಪಾಲದಾಸರ ಕೃತಿ


ರಾಗ : ಆರಭಿ

ಆದಿತಾಳ


ಇದೇ ಪಾಲಿಸಿದೆಪಾಲಿಸಿದೆಪಾಲಿಸಯ್ಯ

ಪದುಮ ಸಂಭವ ಪಿತನೆ ಪದೋಪದಿಗೆ ಎಮಗಿಂದು

||pa||


ಜೀವ ಅಸ್ವಾತಂತ್ರ್ಯ ದೇವ ನಿಜ ಸ್ವಾತಂತ್ರ್ಯ

ಜೀವ ಜಡರೆಲ್ಲ ದೇವರಾಧೀನವೆಂದು|

ಜೀವೋತ್ತಮರಲಿ ಭಕುತಿ ಜಡದಲ್ಲಿ ವಿರಕುತಿ

ಕಾವ ಕೊಲ್ಲುವುದೆಲ್ಲ ಶ್ರೀಹರಿ ಎಂಬ ಜ್ಞಾನ||1||


ಬಿಂಬ ಚಲಿಸಿದರೆ ಪ್ರತಿಬಿಂಬ ಚಲಿಸುವುದು

ಬಿಂಬ ಪೂರ್ಣನು ಪ್ರತಿಬಿಂಬನು ಅಲ್ಪ|

ಉಂಬುಡುವ ಕ್ರಿಯೆಗಳನು ಬಿಂಬ ಮಾಡಿಸಲು

ಪ್ರತಿಬಿಂಬಾಖ್ಯವುಂಟೆಂಬ ಬಿಂಬಾಕ್ರಿಯವು ಎನಗೆ||2||


ಬಂಧನಾ ನಿವೃತ್ತಿಯು ಎಂದಿಗೋ ಎನಗೆಂದು

ಸಂದೇಹದಿಂದ ನಾ ಕೇಳಲಿಲ್ಲ|

ಸುಂದರಮೂರುತಿ ಗೋಪಾಲವಿಠ್ಠಲ

ಕುಂದಿಲ್ಲದಲೆ ಎನಗೆ ನವವಿಧ ಭಕುತಿಯ||3||


Garuda gamana bandano

ರಚನೆ : ಶ್ರೀ ಪುರಂದರದಾಸರು.


ರಾಗ : ಚಂದ್ರಕೌನ್ಸ. 

ತಾಳ : ಆದಿ. 


ಗರುಡ ಗಮನ ಬಂದನೋ-ನೋಡಿರೊ |

ಗರುಡ ಗಮನ ಬಂದನೋ ||ಪ||


ಗರುಡ ಗಮನ ಬಂದ ಧರಣಿಯಿಂದೊಪ್ಪುತ|

ಕರೆದು ಬಾರೆನ್ನುತ ವರಗಳ ಬೀರುತ ||ಅ.ಪ||


ಎನ್ನ ರಕ್ಷಿಪ ದೊರೆ ಇಲ್ಲಿಗೆ ತಾ ಬಂದ |

ಚಿನ್ನದೋಲ್ ಪೊಳೆವ ವಿಹಂಗ ರಥದಲಿ ||

ಘನ್ನ ಮಹಿಮ ಬಂದ ಚ್ಛಿನ್ನ ಮೂರುತಿ ಬಂದ |

ಸಣ್ಣ ಕೃಷ್ಣನು ಬಂದ ಬೆಣ್ಣೆಗಳ್ಳನು ಬಂದ ||1||


ಪಕ್ಷಿವಾಹನ ಬಂದ ಲಕ್ಷ್ಮೀಪತಿಯು ಬಂದ |

ಕುಕ್ಷಿಯೊಳೀರೇಳು ಜಗವನಿಟ್ಟವ ಬಂದ ||

ಸೂಕ್ಷ್ಮ-ಸ್ಥೂಲದೊಳಗಿರುವನು ತಾ ಬಂದ |

ಸಾಕ್ಷೀ ಭೂತನಾದ ಸರ್ವೇಶ್ವರ ಬಂದ ||2||


ವರದ ಪುರಂದರ ವಿಠಲರಾಯನು ಬಂದ |

ಬಂದು ನಿಂದು ನಲಿದಾಡುತಲಿಪ್ಪನು ||

ಅಂದು ಸಾಂದೀಪನ ನಂದನನ ತಂದಿತ್ತ|

ಸಿಂಧು ಶಯನ ಆನಂದ ಮೂರುತಿ ಬಂದ ||3||


           🙏ಶ್ರೀ ಕೃಷ್ಣಾರ್ಪಣಮಸ್ತು 🙏


Raaga : chandrakauns. 

Taala : aadi. 


Garuḍa gamana bandanō-nōḍiro |

garuḍa gamana bandanō ||pa||


garuḍa gamana banda dharaṇiyindopputa|

karedu bārennuta varagaḷa bīruta ||a.Pa||


enna rakṣipa dore illige tā banda |

cinnadōl poḷeva vihaṅga rathadali ||

ghanna mahima banda cchinna mūruti banda |

saṇṇa kr̥ṣṇanu banda beṇṇegaḷḷanu banda ||1||


pakṣivāhana banda lakṣmīpatiyu banda |

kukṣiyoḷīrēḷu jagavaniṭṭava banda ||

sūkṣma-sthūladoḷagiruvanu tā banda |

sākṣī bhūtanāda sarvēśvara banda ||2||


varada purandara viṭhalarāyanu banda |

bandu nindu nalidāḍutalippanu ||

andu sāndīpana nandanana tanditta|

sindhu śayana ānanda mūruti banda ||3||


Gange janani mangala roopini

ಶ್ರೀವಿದ್ಯಾಪ್ರಸನ್ನತೀರ್ಥರ ಕೃತಿ


ರಾಗ : ದೇಶ್

ಆದಿತಾಳ


ಗಂಗೇ ಜನನೀ ಮಂಗಳರೂಪಿಣಿ

ತುಂಗ ಮಹಿಮನ ಪಾದಾಂಗುಳಿಜಾತೆ 

॥ಪ॥


ಸಂಗತಿಯರುಹಲು ಬಂದಿರುವೆವು ಕೃಪಾ

ಪಾಂಗವ ತೋರೆಲೆ ಇಂಗಿತವರಿತು ॥ಅ.ಪ॥


ನಾಲ್ಕು ಮೊಗನು ಹರಿ ಕಾಲಿಗೆ ಕೆಡುಹಲು

ಶೂಲಧರನ ಶಿರ ಆಲಯ ಮಾಡಿದೆ

ಶೈಲದಂತಿಹ ಪಾಪ ಜಾಲಿಸಿ ಕಳೆಯುವೆ

ಪೇಳಲಳವೆ ನಿನ್ನ ಶೀಲವ ಸುಲಭದಿ ॥೧॥


ಚಾರು ನದಿಗಳು ಹೇರಳವಿದ್ದರು

ಭಾರತ ದೇಶದಿ ಭಾಗ್ಯದೇವತೆ ನೀ

ದೂರ ದೂರ ದೇಶಗಳಲಿ ನೆಲೆಸಿಹ

ಧೀರರು ನಿನ್ನಯ ಕೋರುತಲಿರುವರು ॥೨॥


ಅಂಗಳದಲಿ ಬಿದ್ದು ಹರಿವ ಜಲವು ನಿನ್ನ

ಸಂಗದಿ ಪರಮಮಂಗಲ್ಯವ ಪಡೆವುದು

ಶೃಂಗಾರದ ನಿಧಿ ರಂಗನ ಸೇವೆಗೆ

ಗಂಗೇ ಎನ್ನಂತರಂಗವ ಶೋಧಿಸೆ ॥೩॥


ಭೂಮಿಯ ಭೇದಿಸಿ ಸುಂದರ ರೂಪದಿ

ಸ್ವಾಮಿ ಶ್ರೀಮಧ್ವರ ಚರಣಕೆ ನಮಿಸಿ

ಆ ಮಹಾತ್ಮರ ದರುಶನದಿ ಪ್ರಸನ್ನಳೇ

ಕಾಮಿತ ಕರುಣಿಸೇ ತ್ರಿಕರಣ ಶುದ್ಧಿಯ ॥೪॥


Gajavadana pavana

ಶ್ರೀಗೋಪಾಲದಾಸರ ಕೃತಿ


ರಾಗ : ಬೃಂದಾವನಸಾರಂಗ

ಆದಿತಾಳ


ಗಜವದನ ಪಾವನ ವಿಘ್ನನಾಶನ ||ಪ||


ವರ ಪಾಶಾಂಕುಶಧರ ಪರಮದಯಾಳೊ

ಕರುಣಾಪೂರಿತ ಗೌರೀವರಕುಮಾರನೆ ॥೧॥


ಸುಂದರವದನ ಅರವಿಂದನಯನ ಘನ-ಸುಂದರಿ ಕಂದನೆ ಬಂದು ರಕ್ಷಿಸೊ ॥೨॥


ಗೋಪಾಲವಿಠಲನ ಅಪಾರ ಭಜಕನೆ

ಶಾಪಾನುಗ್ರಹಶಕ್ತಾನೇಕ ಮಹಿಮಾ ॥೩॥


Lakshmi Vallabha Jaya

(Dashaavatarada Aarathi Pada)

ಮುಂಬರುವ ಶ್ರೀಮೋಹನದಾಸರ ಆರಾಧನೆಯ ಪ್ರಯುಕ್ತ


 *ದಶಾವತಾರದ* *ಆರತಿ* *ಪದ*


ರಾಗ : ಆನಂದ ಭೈರವಿ

ತಾಳ : ತಿಶ್ರನಡೆ


ಲಕ್ಷ್ಮೀವಲ್ಲಭ ಜಯ ಪಕ್ಷಿವಾಹನ ಜಯ

ಮೋಕ್ಷದಾಯಕನೆ ಜಯ ಜಯ ॥ ಪ॥


ಮೋಕ್ಷದಾಯಕನೆ ಮಧುಸೂದನ ಪದ್ಮಾಕ್ಷಗಾರುತಿಯ ಬೆಳಗಿರೇ ॥ಅ.ಪ.॥


ಜಲದೊಳು ಸಂಚರಿಸಿ ಬಲು ಗಿರಿಯ ಧರಿಸಿದ

ಇಳೆಯ ದಾಡೆಯಿಂದ ನೆಗಹಿದಾ ||

ಇಳೆಯ ದಾಡೆಯಿಂದ ನೆಗಹಿದ ನರಹರಿ 

ಚೆಲುವಗಾರುತಿಯ ಬೆಳಗಿರೆ 

॥೧॥

ಶೋಭಾನೆ ಶೋಭಾನೆ ಶೋಭಾನೆ


ಚಿಕ್ಕ ಬ್ರಾಹ್ಮಣನಾಗಿ ಬಲಿಯ ದಾನವ ಬೇಡಿ

ಆಕ್ರಮಿಸಿದನೆ ತ್ರಿಲೋಕ ||ಆಕ್ರಮಿಸಿ ತ್ರಿಲೋಕನಾಳ್ದ ಶ್ರೀರಾಮ

ಶ್ರೀ ಕೃಷ್ಣಗಾರುತಿಯ ಬೆಳಗಿರೇ

॥೨॥

ಶೋಭಾನೆ ಶೋಭಾನೆ ಶೋಭಾನೆ

 

ನಗ್ನನಾಗಿ ವ್ರತವಾ ವಿಘ್ನವ ಚರಿಸಿದ

ಅಜ್ಞಾನಿ ಕಲಿಯ ಸದೆದ ||ಅಜ್ಞಾನಿ ಕಲಿಯ ಸದೆದ ಮೋಹನ್ನ ವಿಠ್ಠಲ ಸರ್ವಜ್ಞಗಾರುತಿಯ ಬೆಳಗಿರೇ

॥೩॥

ಶೋಭಾನೆ ಶೋಭಾನೆ ಶೋಭಾನೆ

Tulasi Dala Ondu


Yeno ee vesha vedavyasa

ಶ್ರೀಮೋಹನದಾಸಾರ್ಯ ವಿರಚಿತ


ಶ್ರೀವೇದವ್ಯಾಸದೇವರ ಸ್ತೋತ್ರ ಪದ


ರಾಗ : ಕಾಂಬೋಧಿ

ಆದಿತಾಳ


ಏನೋ ಈ ವೇಷ ವೇದವ್ಯಾಸ ||pa||


ಭಾನುಕೋಟಿ ಪ್ರಕಾಶ ಬದರೀ ನಿವಾಸ ||a.pa||


ದ್ರೌಪದಿ ಕರೆಯಲಪಾರ ವಸ್ತ್ರವನಿತ್ತೆ

ಕೌಪೀನ ಧರಿಸಿದ ಕೌತುಕವೇನಯ್ಯ ||1||


ಮುತ್ತು ಮಾಣಿಕ್ಯ ನವರತ್ನ ಮಕುಟವಿರೆ

ನೆತ್ತಿಲಿ ಕೆಂಜೆಡೆ ಪೊತ್ತುಕೊಂಡಿಪ್ಪುದು ||2||


ವರ ವೈಕುಂಠವ ಬಿಟ್ಟು ಮೋಹನ ವಿಠ್ಠಲ

ಧರೆಯೊಳು ಬೋರೆಯ ಮರದಡಿಯಲಿರುವುದು ||3||



Sri Mohanadasarya virachita Sri vedavyasadevara stotra pada


Raaga : Kambodhi

Aaditaala


Yeno ee vesha vedavyasa||p||


Banu koti prakashaa badari nivasa||A.P||


Mutthu manikya mukuta veere

netthili genjade potthi kondippudhu|1|


drowpathi kareyalapaarvasthravanitthe

kowpina dharisidha kouthukavenayya|2|


vara vaikuntavannu bittu mohana vittalanna

dhareyolu poreya maradhadili iruvudhu|3|

Sripadaraja Sandarshanadi

ಶ್ರೀವಿದ್ಯಾಪ್ರಸನ್ನತೀರ್ಥ ವಿರಚಿತ ಶ್ರೀಪಾದರಾಜರ ಸ್ತೋತ್ರ ಪದ


ರಾಗ : ಆರಭಿ 

ಆದಿತಾಳ


ಶ್ರೀ ಪಾದರಾಜ ಸಂದರ್ಶನದಿ ಸಕಲ ಸಂತಾಪಗಳು ಕಳೆದುವಿಂದು ॥ಪ॥


ತಾಪಸೋತ್ತಮರಿವರು ಇಹ ಪರಗಳಲ್ಲೆಮ್ಮ

ಕಾಪಾಡುತಿರುವರೆಂದು ॥ಅ.ಪ॥


ಸ್ವರ್ಣವರ್ಣರ ಕುವರ ಜ್ಞಾನಭಕ್ತಿಗಳಿಂದ

ಪೂರ್ಣರಿದ್ದರು ಲೋಕದಿ

ಸ್ವರ್ಣಾಕ್ಷರಗಳಿಂದ ಬರೆಯುವಂತಹ ಶಾಸ್ತ್ರ

ನಿರ್ಣಯಗಳಿತ್ತರಿವರು ॥೧॥


ಮಂಗಳಾತ್ಮಕ ನಮ್ಮ ರಂಗವಿಠಲ ಕೃಪಾ

ಪಾಂಗ ಪಾತ್ರರು ಪೂಜ್ಯರು

ಕಂಗಳಿಗೆ ಹಬ್ಬವಿದು ಮಂಗಳಕೆ ಸಾಧನವು

ಹಿಂಗಿತು ಎಮ್ಮಯ ಕೊರತೆಯು ॥೨॥


ಜ್ಞಾನ ಭಂಡಾರವನು ಲೋಕಕೀಯಲು ಶುದ್ಧ

ಮಾನಸ ಪ್ರಸನ್ನರಿವರು

ಮೌನಿವರ ವ್ಯಾಸತೀರ್ಥರಲಿ ಪರಮಾದರದಿ

ಜ್ಞಾನಧಾರೆಯ ಕರೆದರು ॥೩॥

Aaj ki raat - Stree 2

Movie: Stree2 (2024) Music: Sachin-Jigar Lyrics: Amitabh Bhattacharya Singers:  Madhubanti Bagchi and Divya Kumar Bande toh kya is husn pe f...